`ಅಪ್ಪಯ್ಯ` ಈ ವಾರ ಬಿಡುಗಡೆ
Posted date: 09 Mon, Sep 2013 – 06:07:09 PM

ಒಂದು ನೈಜ ಕಥೆಗೆ ಅಷ್ಟೇ ಸರಳ ನಿರೂಪಣೆ ಅಳವಡಿಸಿ ಮನಸ್ಸಿಗೆ ಹಾಗೂ ಹೃದಯಕ್ಕೆ ಹತ್ತಿರವಾಗುವಂತೆ ಚಿತ್ರಣ ಆಗಿರುವ `ಅಪ್ಪಯ್ಯ` ಖ್ಯಾತ ನಿರ್ದೇಶಕ ಎಸ್ ನಾರಾಯಣ್ ಅವರ ನಿರ್ದೇಶನದಲ್ಲಿ ಈ ವಾರ ಬಿಡುಗಡೆ ಆಗುತ್ತಿದೆ. ಈ ಚಿತ್ರದ ಕಥೆ ನಿಜ ಜೀವನದಲ್ಲಿ ಜರುಗಿರುವ ವಿಚಾರ.  
ಜನಪ್ರಿಯ ನಾಯಕ ಶ್ರೀನಗರ ಕಿಟ್ಟಿ ಹಾಗೂ ಸುಂದರ ಚೆಲುವೆ ಭಾಮಾ ಅವರ ಮುಖ್ಯ ಪಾತ್ರಗಳಲ್ಲಿ ಅಭಿನಯಿಸಿರುವ ಈ ಚಿತ್ರವನ್ನು ಶ್ರೀಮತಿ ಭಾಗ್ಯವತಿ ಕಂಬೈನ್ಸ್ ಅಡಿಯಲ್ಲಿ ಶ್ರೀಮತಿ ಭಾಗ್ಯವತಿ ಹಾಗೂ ಪವನ್ ಕಾರ್ತಿಕ್ ಅವರು ನಿರ್ಮಾಣ ಮಾಡಿದ್ದಾರೆ.
ಎಸ್ ನಾರಾಯಣ ಅವರ ಮಹತ್ವಾಕಾಂಕ್ಷೆಯ ಚಿತ್ರ `ಅಪ್ಪಯ್ಯ` ಸೆನ್ಸಾರ್ ಮಂಡಲಿಯಿಂದ ಯು/ಎ ಪಡೆದಿರುವ ಚಿತ್ರ.  
ಯಶಸ್ವಿ ಚಿತ್ರಗಳ ನಿರ್ದೇಶಕ, ನಿರ್ಮಾಪಕ, ನಟ ಎಸ್ ನಾರಾಯಣ್ ಅವರು `ಅಪ್ಪಯ್ಯ` ಚಿತ್ರಕ್ಕೆ ಹಳ್ಳಿಗಾಡಿನ ಪರಿಸರ
ಅರಿಸಿಕೊಂಡಿದ್ದಾರೆ.
ಎಸ್ ನಾರಾಯಣ್ ಹಾಗೂ ಕವಿರಾಜ್ ಅವರ ಸಾಹಿತ್ಯವಿದೆ. ಹಾಡುಗಳನ್ನು ಎಸ್ ನಾರಾಯಣ್ ಅವರು ರಾಗ ಸಂಯೋಜನೆ ಮಾಡಿದ್ದಾರೆ. ಧರ್ಮ ವಿಶ್ ಅವರು ಹಿನ್ನಲೆ ವಾದ್ಯಗಳನ್ನು ಜೋಡಿಸಿ ಕೊಟ್ಟಿದ್ದಾರೆ.
ಅಶರಾಣಿ, ಇಂದ್ರಕುಮಾರ್, ಸುರೇಶ್ಚಂದ್ರ, ನಂದ ಹಾಗೂ ಇನ್ನಿತರರು ಇರುವ ಈ ಚಿತ್ರಕ್ಕೆ ಜಗದೀಶ್ ವಾಲಿ ಅವರ ಛಾಯಾಗ್ರಹ ಇದೆ. ಡಿಫರೆಂಟ್ ಡ್ಯಾನಿ ಅವರ ಸಾಹಸ ಸಂಯೋಜನೆಯು ಚಿತ್ರದ ಪ್ರಮುಖ ಅಂಶ.

Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed